ಒಂದು ಸಿನಿಮಾದಲ್ಲಿ ನಾಯಕ ಅನೂಪ್ ಮಗನಾದರೆ, ಇನ್ನೊಂದು ಸಿನಿಮಾದಲ್ಲಿ ಅತಿಥಿ ಪಾತ್ರದಾರಿ ಅವರ ಅಪ್ಪ ಸಾ ರಾ ಗೋವಿಂದು. ಅದೇ ‘ಡವ್’ ಹಾಗೂ ‘ಟೈಟ್ಲು ಬೇಕ’ ಸಿನಿಮಗಳು.
ಸಿನೆಮಾದ ಶೀರ್ಷಿಕೆಯೇ ‘ಟೈಟ್ಲು ಬೇಕ’. ವೀರಭದ್ರೇಶ್ವರ ಮೂವಿ ಮೇಕರ್ಸ್ ಅಡಿಯಲ್ಲಿ ನಿರ್ಮಾಣದ ಸಿನೆಮಾಕ್ಕೆ ಆನಂದ್ ರಾಜ್ ಅವರು ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಹಾಗೂ ನಿರ್ದೇಶನ ಜವಾಬ್ದಾರಿ ಅನ್ನು ಹೊತ್ತಿರುವವರು. ಈ ಚಿತ್ರ ನಿರ್ಮಾಣ ‘ನವರಂಗಿ’ ಸಿನೆಮಾದ ಜೋಡಿಗಳಾದ ಮಹಾದೇವಪ್ಪ ಹಲಗತ್ತಿ ಹಾಗೂ ಸಂಗಮೇಶ್ ಹಲಗತ್ತಿ.
ಈ ಚಿತ್ರದಿಂದ ಆಯುಶ್ ನಾಯಕನಾಗಿ ಪರಿಚಯ ಆಗುತ್ತಿದ್ದಾರೆ. ನೇಹ ಪಾಟೀಲ್ ನಾಯಕಿ. ವರ್ಧನ್, ರಾಘವೇಂದ್ರ, ಪ್ರದೀಪ್, ಮಾನಸ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಸಾ ರಾ ಗೋವಿಂದು, ಎಸ್ ಎ ಚಿನ್ನೇ ಗೌಡ್ರು ಹಾಗೂ ನಿರ್ದೇಶಕ ಟೇಶಿ ವೆಂಕಟೇಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಗೀತ ನೋಬಿನ್ ಪಾಲ್, ಛಾಯಾಗ್ರಹಣ ರಾಕೇಶ್ ತಿಲಕ್, ಸಂಕಲನ ಸನತ್ ಸುರೇಶ್, ನೃತ್ಯ ನಂದ ಹಾಗೂ ಕಲೈ ಒದಗಿಸಲಿದ್ದಾರೆ.